ಬೆಂಗಳೂರು ಟ್ರಾಫಿಕ್ ಯಾರಿಗೆ ತಾನೇ ಬೇಸರ ತರಿಸಿಲ್ಲ ಹೇಳಿ ಉದ್ಯಾನ ನಗರಿಯ ಒತ್ತಡ ದಿನದಿಂದ ದಿನಕ್ಕೆ ಮಿತಿ ಮೀರ್ತಾ ಇದೆ ಈ ಹಿನ್ನಲೆ ನಿಮಗೊಂದು ಸಿಹಿ ಸುದ್ದಿ ಇದ್ದು ಭಾರತದ ಮೊಟ್ಟಮೊದಲ ಕೃತಕ ಬುದ್ಧಿ ಮತ್ತೆ ಅಥವಾ ಎಐ ಚಾಲಿತ ನಗರವನ್ನ ನಿರ್ಮಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬೆಂಗಳೂರಿನ ಟ್ರಾಫಿಕ್ ಮುಕ್ತಿ ಹಾಡಲು ತಂತ್ರಜ್ಞಾನದ ಹೊಸ ಯುಗಕ್ಕೆ ನಾಂದಿ ಹಾಡಲು ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಕೂಸಾಗಿ ಗ್ರೇಟರ್ ಬೆಂಗಳೂರು ಇನ್ನೋವೇಷನ್ ಅಂಡ್ ಟೆಕ್ ಸಿಟಿ ಬಿಡದಿ ಬಳಿ ತೆಲೆ ಎತ್ತಲಿದೆ. ಕೆಲಸ ಜೀವನ ಮತ್ತು ಮನರಂಜನೆಯನ್ನ ಒಂದೇ ಸೂರಿ ನಡೆತರುವ ಕಲ್ಪನೆಯನ್ನ ಈ ಮಹಾನಗರಿ ಹೊಂದಿದೆ. ಜಿಬಿಐಟಿ ಕೇವಲ ಕಟ್ಟಡಗಳು ಮಾತ್ರ ಇರದೆ ಪ್ರಕೃತಿ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮವಾಗಲಿದೆ. ಹಾಗಾದ್ರೆ ಹೇಗಿರಲಿದೆ ಈ ಎಐಸಿಬಿ ಇಲ್ಲಿ ಏನೆಲ್ಲ ಅದ್ಭುತಗಳು ಇರಲಿವೆ ಬನ್ನಿ ಸಂಪೂರ್ಣವಾಗಿ ನೋಡ್ಕೊಂಡು ಬರೋಣ ಹೌದು ಬೆಂಗಳೂರಿನ ನಗರದ ಜನಸಂಖ್ಯೆಯು 1.43 ನಾಕುಮೂರು ಕೋಟಿಗೂ ಅಧಿಕವಾಗಿದ್ದು 875ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ನೆಲೆಯಾಗಿದೆ. ಸ್ಟಾರ್ಟಪ್ ಐಟಿಬಿಟಿ ಫಿನ್ಟೆಕ್ ಆರೋಗ್ಯ ಶಿಕ್ಷಣ ಮತ್ತು ನಾವೀನತೆ ಕ್ಷೇತ್ರಗಳಲ್ಲಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ.
ಬೆಂಗಳೂರು ದಿನದಿಂದ ದಿನಕ್ಕೆ ಬೆಳೆತಾ ಇದೆ. ಈಗ ಮತ್ತಷ್ಟು ಬೆಳೆಯಲು ಅದಕ್ಕೆ ಇನ್ನಷ್ಟು ಜಾಗ ಬೇಕಿದೆ. ಇದೇ ಸಂದೇಶದೊಂದಿಗೆ ಹೊಸನಗರದ ಅಗತ್ಯವನ್ನ ಡಿಕೆ ಶಿವಕುಮಾರ್ ಒತ್ತಿ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವಂತಹ ವಿಡಿಯೋದಲ್ಲಿ ಮಾತನಾಡಿರುವಂತಹ ಡಿಕೆ ಶಿವಕುಮಾರ್ ಇನ್ನೊಂದು ಬೆಂಗಳೂರನ್ನ ಉತ್ತಮವಾದ ಮತ್ತು ಶ್ರೇಷ್ಠವಾದ ಬೆಂಗಳೂರನ್ನ ನಿರ್ಮಿಸುವುದು ನನ್ನ ಕನಸು ಅಂತ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ ಈ ಯೋಜನೆಯು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಅಂತ ಡಿಕೆ ಶಿವಕುಮಾರ್ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ ಏನಿದು ಜಿಬಿಐಟಿ ಸಿಟಿ ಎಷ್ಟು ದೊಡ್ಡದಿರುತ್ತೆ ಮೊದಲ ಎಐ ನಗರದಲ್ಲಿ ಏನೆಲ್ಲ ಇರಲಿದೆ ಏನು ಇನ್ನು ಡಿಕೆ ಶಿವಕುಮಾರ್ ಅವರ ಕನಸಿನ ಕೂಸಾಗಿರುವಂತಹ ಜಿಬಿಐಟಿ ಏನು ಎಂಬುದನ್ನ ನೋಡಿದ್ರೆ ಇದು ಭಾರತದ ಮೊಟ್ಟಮೊದಲ ಕೃತಕ ಬುದ್ಧಿ ಮತ್ತೆ ಅಥವಾ ಎಐ ಚಾಲಿತ ನಗರವಾಗಲಿದೆ ಒಟ್ಟು 9ಸ000 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಈ ಟೌನ್ಶಿಪ್ ನಿರ್ಮಾಣವಾಗಲಿದ್ದು ಜನರ ದೈನಂದಿನ ಜೀವನದಲ್ಲಿ ಹೊಸತನವನ್ನು ತರುವ ಗುರಿಯನ್ನ ಹೊಂದಿದೆ ಈ ಯೋಜನೆಯು ಕೆಲಸ ಜೀವನ ಮತ್ತು ವಿನೋದ ಅಥವಾ ಆಟ ಎಂಬ ಮೂರು ಪ್ರಮುಖ ವಿಭಾಗಗಳನ್ನ ಹೊಂದಿದೆ ಮೊದಲನೆಯದಾಗಿ ಕೆಲಸಕ್ಕೆ ಸಂಬಂಧಿಸಿದಂತೆ ಇದು ಉದ್ಯಮ ಮತ್ತು ತಂತ್ರ ಜ್ಞಾನದ ಕೇಂದ್ರವಾಗಿರಲಿದೆ 2000ಕ್ಕೂ ಹೆಚ್ಚು ಎಕರೆ ಜಾಗವನ್ನ ಎಐ ಮತ್ತು ಸಂಬಂಧಿತ ಪೂರಕ ಕೈಗಾರಿಕೆಗಳಿಗೆ ಮೀಸಲಿಡಲಾಗಿದೆ.
ವಿಶ್ವ ದರ್ಜೆಯ ವಾಣಿಜ್ಯ ಸ್ಥಳಗಳು ಪ್ಲಗ್ ಅಂಡ್ ಪ್ಲೇ ಸೆಟ್ಪ್ ಮತ್ತು ಅತ್ಯಾಧುನಿಕ ವೇರ್ ಹೌಸ್ ಗಳನ್ನ ಇಲ್ಲಿ ನಿರ್ಮಿಸಲಾಗುವುದು ಸ್ಟಾರ್ಟಪ್ ಇನ್ಕ್ಯುಬೇಟರ್ಗಳು ಆಕ್ಸಿಲರೇಟರ್ಗಳು ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳ ಮೂಲಕ ಉದ್ಯಮಶೀಲತೆಗೆ ಉತ್ತೇಜನ ನೀಡುವ ಗುರಿಯನ್ನ ಹೊಂದಲಾಗಿದೆ ವಾಕ್ ಟು ವರ್ಕ್ ಪ್ಲೇ ಕಾನ್ಸೆಪ್ಟ್ನಲ್ಲಿ ಯೋಜನೆ 17ಕ್ಕೂ ಹೆಚ್ಚು ಕೆರೆಗಳು 180 ಎಕರೆ ಪಾರ್ಕ್ ಎರಡನೆಯದಾಗಿ ಜೀವನಕ್ಕೆ ಸಂಬಂಧಿಸಿದಂತೆ ಇಲ್ಲಿ ಪ್ರಕೃತಿಯೊಂದಿಗೆ ಆಧುನಿಕ ಜೀವನ ಸಮ್ಮಿಲನವಾಗಲಿದೆ ವಾಕ್ ಟು ವರ್ಕ್ ಅಥವಾ ಕೆಲಸಕ್ಕೆ ನಡೆದು ಹೋಗುವ ಸಮುದಾಯವನ್ನ ನಿರ್ಮಿಸುವ ಮೂಲಕ ಆರೋಗ್ಯಕರ ಜೀವನಶೈಲಿಗೆ ಒತ್ತನ್ನ ನೀಡಲಾಗಿದೆ ಇಲ್ಲಿ 17ಕ್ಕೂ ಹೆಚ್ಚು ಕೆರೆಗಳು ಅಂದರೆ 1012 ಪ್ಲಸ್ ಎಕರೆ ಜಲ ಪ್ರದೇಶ ಮತ್ತು 1080 ಎಕರೆಗಳಷ್ಟು ಉದ್ಯಾನವನ ಹಾಗೂ ತೆರೆದ ಸ್ಥಳಗಳನ್ನ ಜಿಬಿಐಟಿ ಒಳಗೊಂಡಿರುತ್ತೆ ಅದರ ಜೊತೆ ಎಐ ಚಾಲಿತ ಸ್ಮಾರ್ಟ್ ಮನೆಗಳು ವಿಶ್ವ ದರ್ಜೆಯ ಶಿಕ್ಷಣ ಮತ್ತು ವೈದ್ಯಕೀಯ ಕೇಂದ್ರಗಳು ಹಾಗೂ ಎಐ ಸಂಚಾರ ನಿರ್ವಹಣ ವ್ಯವಸ್ಥೆ ಇಲ್ಲಿ ಇರಲಿದೆ ಕೊನೆಯದಾಗಿ ವಿನೋದ ಅಥವಾ ಮನರಂಜನೆ ಮತ್ತು ಸಂಭ್ರಮದ ತಾಣ ಇಲ್ಲಿ ಇರಲಿದ್ದು ವಿಶ್ವ ದರ್ಜೆಯ ಮನರಂಜನ ವಲಯಗಳು ಅತ್ಯಾಧುನಿಕ ಕ್ರೀಡಾಂಗಣಗಳು ಮತ್ತು ಹಸಿರು ಕನ್ಸರ್ಟ್ ವಲಯಗಳನ್ನ ಸ್ಥಾಪಿಸಿ ನಿವಾಸಿಗಳಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಲು ಸರ್ಕಾರ ಯೋಜನೆಯನ್ನ ಹಾಕಿಕೊಂಡಿದೆ 300 ಮೀಟರ್ ಅಗಲದ ಬಿಸಿನೆಸ್ ಕಾರ್ಡಾರ್ ಬಿಡದಿಯಿಂದ ಕೇವಲ 6 ಕಿಲೋಮೀಟ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆಯಾಗಿರುವ ಜಿಬಿಐಟಿ ಯೋಜನೆಯು ಬೆಂಗಳೂರು ನಗರದಿಂದ 30 ಕಿಲೋಮೀಟ ದೂರದಲ್ಲಿ ಇದ್ದುಎನ್ಎಚ್ 275 ಹಾಗೂಎನ್ಎಚ್ 205 ನಂತಹ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ಹಾಗೂ ಎಸ್ಟಿಆರ್ಆರ್ ಗೆ ಅತ್ಯುತ್ತಮ ಸಂಪರ್ಕವನ್ನ ಹೊಂದಿದೆ ಈ ಅತ್ಯಾಧುನಿಕ ನಗರಕ್ಕೆ ಸುಲಭ ಸಂಪರ್ಕ ಕಲ್ಪಿಸಲು 300 ಮೀಟರ್ ಅಗಲದ ಬೃಹತ್ ವಾಣಿಜ್ಯ ಕಾರ್ಡರ್ ನಿರ್ಮಿಸಲಾಗುವುದು ಅದಲ್ಲದೆ ಬಿಡದಿ ರೈಲ್ವೆ ನಿಲ್ಧಾಣದಿಂದಆಕಿಮ ಹಾಗು ಚೆಲ್ಲಗಟ್ಟ ಮೆಟ್ರೋ ನಿಲ್ಧಾಣದಿಂದ 16 ಕಿಲೋಮೀಟ ದೂರದಲ್ಲಿ ಇದೆ ಭವಿಷ್ಯದಲ್ಲಿ ಬೆಳದಿವರೆಗೂ ಮೆಟ್ರೋ ಸಂಪರ್ಕವನ್ನ ವಿಸ್ತರಿಸುವ ಪ್ರಸ್ತಾಪ ಕೂಡ ಇದ್ದು ಜಿಬಿಐಟಿಗೂ ಕೂಡ ಮೆಟ್ರೋ ರೈಲು ಸಂಚರಿಸುವ ನಿರೀಕ್ಷೆ ಇದೆ ನಗರದೊಳಗೆ 70 ಮೀಟರ್ ಅಗಲದ ಪ್ರಮುಖ ರಸ್ತೆಗಳು ರಿಂಗ್ ರಸ್ತೆಗಳು ಮತ್ತು ಎಕ್ಸ್ಪ್ರೆಸ್ ವೇ ಲಿಂಕ್ಗಳನ್ನ ನಿರ್ಮಿಸಲಾಗುವುದು.
ಈ ಮೂಲಕ ಶೂನ್ಯ ಸಂಚಾರ ದಟ್ಟಣೆಯ ಸಂಪರ್ಕ ವ್ಯವಸ್ಥೆಯನ್ನ ಹೊಸನಗರಕ್ಕೆ ಕಲ್ಪಿಸುವ ಕನಸನ್ನ ಸರ್ಕಾರ ಹೊಂದಿದೆ ಜೀರೋ ಟ್ರಾಫಿಕ್ ಜೀರೋ ವೇಸ್ಟ್ ಇದರ ರಧ್ಯಯ 20ಸಾವಿರ ಕೋಟಿ ಬಂಡವಾಳ ಕರ್ನಾಟಕದವರೆಗೆ ಆಧ್ಯತೆ ಪ್ರಮುಖವಾಗಿ ಜಿಬಿಐಟಿ ಯೋಜನೆಯು ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡುವ ಪ್ರಮುಖ ಗುರಿಯನ್ನ ಹೊಂದಿದೆ. ನಗರದ ಹೊರವಲಯದಲ್ಲಿ ಬೃಹತ್ ವಾಣಿಜ್ಯ ಚಟುವಟಿಕೆಗಳನ್ನ ಸ್ಥಳಾಂತರಿಸುವ ಮೂಲಕ ಇದನ್ನ ಸಾಧಿಸಲಾಗುವುದು. ಈ ಯೋಜನೆಯು ಐಟಿಎಐ ಸ್ಟಾರ್ಟಪ್ ಮತ್ತು ಸೇವಾ ವಲಯಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನ ಸೃಷ್ಟಿಸುವ ನಿರೀಕ್ಷೆ ಇದೆ. ಸ್ಥಳೀಯರಿಗೆ ಮೊದಲ ಆಧ್ಯತೆ ನೀತಿಯ ಅಡಿಯಲ್ಲಿ ಕರ್ನಾಟಕದ ಯುವಕರಿಗೆ ಉದ್ಯೋಗದಲ್ಲಿ ಆಧ್ಯತೆ ನೀಡಲಾಗುತ್ತೆ. ಈ ಬೃಹತ್ ಯೋಜನೆಗೆ ಹಣಕಾಸಿನ ಸಂಪನ್ಮೂಲವನ್ನ ಈಗಾಗಲೇ ಸಿದ್ಧಪಡಿಸಲಾಗಿದೆ. ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತನ್ನ ಆಂತರಿಕ ನಿಧಿಯಿಂದ 2950 ಕೋಟಿ ರೂಪಾಯಿ ಮೀಸಲಿಟ್ಟಿದೆ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಹಣಕಾಸು ಸಂಸ್ಥೆಗಳಿಂದ 17500 ಕೋಟಿ ರೂಪಾಯಿಗಳನ್ನ ಪಡೆಯಲಾಗ್ತಾ ಇದ್ದು ಒಟ್ಟಾರೆಯಾಗಿ ಭೂಸ್ವಾಧೀನ ಮೂಲ ಸೌಕರ್ಯ ಮತ್ತು ಅಭಿವೃದ್ಧಿಗಾಗಿ 20ಸಾ ಕೋಟಿ ರೂಪಾಯಿಗೂ ಹೆಚ್ಚಿನ ಹಣ ಯೋಜನೆಗೆ ಲಭ್ಯವಿದೆ. ಯೋಜನೆಯ ವ್ಯಾಪ್ತಿಯಲ್ಲಿರುವಂತಹ ಗ್ರಾಮಗಳನ್ನ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಬದಲಾಗಿ ಆ ಗ್ರಾಮಗಳಿಗೆ ಸ್ಮಾರ್ಟ್ ಸಿಟಿ ಸೌಲಭ್ಯಗಳನ್ನ ಒದಗಿಸಿ ಅಭಿವೃದ್ಧಿಯನ್ನ ಪಡಿಸಲಾಗುವುದು.
ಸರ್ವ ಋತು ರಸ್ತೆಗಳು, ಭೂಗತ ವಿದ್ಯುತ್ ಮಾರ್ಗಗಳು, ಉದ್ಯಾನವನಗಳು ಆಧುನಿಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನ ಕಲ್ಪಿಸಲು ಸರ್ಕಾರ ಮುಂದಾಗಿದೆ. ರೈತರ ಕಲ್ಯಾಣಕ್ಕೆ ಬದ್ದ ಹೊಸ ಯೋಜನಾ ಮಾದರಿ. ರೈತರು ಕೂಡ ಜಿಬಿಐಟಿ ಯೋಜನೆಯಲ್ಲಿ ಪಾಲುದಾರರು. ಇನ್ನು ಈ ಬೃಹತ್ ಯೋಜನೆಯು ರೈತರ ಕಲ್ಯಾಣಕ್ಕೂ ಬದ್ಧವಾಗಿದೆ. ರೈತ ಸಮುದಾಯಗಳನ್ನ ಅಭಿವೃದ್ಧಿ ಪಡಿಸುವ ಮೂಲಕ ಅವರನ್ನ ಸಬಲೀಕರಣ ಗೊಳಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಜೊತೆಗೆ ಪರಿಸರ ಸಂರಕ್ಷಣೆಯ ಭಾಗವಾಗಿ ಬೈರಮಂಗಲ ಕೆರೆ ಮತ್ತು ಋಷಭಾವತಿ ನದಿಯನ್ನ ಪುನಚೇತನಗೊಳಿಸಿ ನೈಸರ್ಗಿಕ ಸಮತೋಲನವನ್ನ ಕಾಪಾಡುವ ಬಗ್ಗೆ ಕೂಡ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. 100 ಎಂಎಲ್ಡಿ ಸಾಮರ್ಥ್ಯದ ಮಳೆನೀರು ಸಂಸ್ಕರಣ ಘಟಕವನ್ನ ಸ್ಥಾಪಿಸುವ ಪ್ರಸ್ತಾಪ ಕೂಡ ಇದೆ. ಕೆರೆಯ ಸುತ್ತಲು ಜೌಗು ಪ್ರದೇಶಗಳು ಮತ್ತು ಉದ್ಯಾನವನಗಳನ್ನ ನಿರ್ಮಿಸಿ ನಗರದ ಶ್ವಾಸಕೋಶವನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ. ಈ ಹಿಂದಿನ ಯೋಜನೆಗಳಂತೆ ರೈತರ ವಿರೋಧ ಎದುರಾಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಭೂಮಾಲಿಕರು ಮತ್ತು ರೈತರನ್ನ ಯೋಜನೆಯಲ್ಲಿ ಪಾಲುದಾರನಾಗಿ ಮಾಡಿಕೊಳ್ಳುತ್ತಾ ಇದೆ. ಇದು ರಾಜ್ಯದಲ್ಲಿ ಅತ್ಯಂತ ಪಾರದರ್ಶಕ ಮತ್ತು ರೈತ ಸ್ನೇಹಿ ಭೂಸ್ವಾಧೀನ ಮಾದರಿಯಾಗಲಿದೆ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. 2013ರ ಕಾಯ್ದೆಗೆ ಅನುಗುಣವಾಗಿ ವ್ಯಾಪಕ ಪುನರ್ವಸತಿ ಮತ್ತು ಪುನರ್ ನಿರ್ಮಾಣ ನೀತಿಯನ್ನ ಸಿದ್ಧಪಡಿಸಲಾಗ್ತಾ ಇದೆ.
ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ನಿವೇಶನವನ್ನ ಭೂಮಾಲಿಕರಿಗೆ ಹಸ್ತಾಂತರಿಸುವವರೆಗೆ ಪ್ರತಿ ಎಕರೆಗೆ ವಾರ್ಷಿಕವಾಗಿ 30ಸಾವ ರೂಪಾಯಯಿಂದ 50ಸಾ ರೂಪಾಯಿಯನ್ನ ನೀಡಲಾಗುವುದು ಭೂರಹಿತ ಕುಟುಂಬಗಳಿಗೆ ವಾರ್ಷಿಕ 25ಸಾವ ರೂಪಾಯನ್ನ ನೀಡಲಾಗುವುದು ಎಕರೆಗೆ ಎವರೆ ಕೋಟಿ ರೂಪಾಯಿವರೆಗೂ ಪರಿಹಾರವನ್ನ ನೀಡಲಾಗುತ್ತೆ. ಒಟ್ಟಿದಲ್ಲಿ ಜಿಬಿಐಟಿ ಎಂಬ ಭಾರತದ ಮೊದಲ ಎಐ ನಗರ ದೇಶದ ಗಮನವನ್ನ ಸೆಳೆದಿದೆ. ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ ಇದಾಗಿದ್ದು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ನಿರ್ಮಿಸಲಾಗ್ತಾ ಇದೆ ಬೆಂಗಳೂರು ಪಶ್ಚಿಮಕ್ಕೆ ಕ್ವೀನ್ ಸಿಟಿ ನಿರ್ಮಾಣ ಆಗ್ತಾ ಇದ್ದು ಎರಡು ಕೂಡ ಬೆಂಗಳೂರಿನ ಮಟ್ಟಿಗೆ ಗೇಮ್ ಚೇಂಜರ್ ಆಗಲಿವೆ.