ಬೆಂಗಳೂರಿಗೆ ಬ್ಯಾಡ್ ನ್ಯೂಸ್ ಮೋದಿ ಫುಲ್ ಘರ ಸಬ್ಬರ್ಬನ್ ರೈಲು ಡೆಡ್ಲೈನ್ 2030ಕ್ಕೆ ಶಿಫ್ಟ್ ಬೆಂಗಳೂರಿನ ಟ್ರಾಫಿಕ್ ನರಕಕ್ಕೆ ಮುಕ್ತಿ ಹಾಡಲೆಂದು ದಶಕಗಳಿಂದ ಕಾಯುತ್ತಿದ್ದ ಯೋಜನೆ ಅದು 1983ರಲ್ಲಿ ಪ್ರಸ್ತ ಸ್ತಾಪವಾಗಿದ್ದ ಡ್ರೀಮ್ ಅದು ಬರೊಬ್ಬರಿ 40 ವರ್ಷಗಳ ಹೋರಾಟದ ನಂತರ 2022ರ ಜೂನ್ನಲ್ಲಿ ಕುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಬಂದು ಆ ಯೋಜನೆಗೆ ಶಂಕು ಸ್ಥಾಪನೆಯನ್ನ ನೆರವೇರಿಸಿದ್ದರು ಅಂದು ಅವರು ಹೇಳಿದ್ದ ಮಾತು ಬೆಂಗಳೂರಿಗಲ್ಲಿ ಹೊಸ ಆಸೆಯನ್ನ ಚಿಗುರಿಸಿತ್ತು ಈ ಯೋಜನೆ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಆದರೆ ನಾನು ಇದನ್ನು ಕೇವಲ 40 ತಿಂಗಳಲ್ಲಿ ಪೂರ್ಣಗೊಳಿಸುತ್ತೇನೆ ಅಂತ ಪ್ರಧಾನಿ ಗುಡುಗಿದ್ದರು ಅಕ್ಟೋಬರ್ 2026ರ ಹೊತ್ತಿಗೆ ಬೆಂಗಳೂರಿಗೆ 148 ಕಿಲೋಮೀಟ ಉದ್ದದ ಸಬ್ ಅರ್ಬನ್ ರೈಲು ಸಿಗಬೇಕಿತ್ತು ಆದರೆ ಮೋದಿ ಮಾತು ಸುಳ್ಳಾಗಿದೆ ಈ ಯೋಜನೆಯ ಡೆಡ್ಲೈನ್ ಈಗ ಬದಲಾಗಿದೆ.
2026ರ ಬದಲು 2030ರ ಮಾರ್ಚ್ಗೆ ಡೆಡ್ಲೈನ್ ಎತ್ತಂಗಡಿಯಾಗಿದೆ ಈ ವಿಳಂಬಕ್ಕೆ ಕಾರಣಗಳೇನು ಅಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಯಾಕೆ ಯಾವ ಲೈನ್ ಮೊದಲು ಶುರುವಾಗುತ್ತೆ ಯಾವಾಗ ಶುರುವಾಗುತ್ತೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡೋಣ ಬನ್ನಿ ಮಲ್ಲಿಗೆ ಕನಕ ಸಂಪಿಗೆ ಪಾರಿಜಾತ ಯಾವ ಲೈನ್ಗೆ ಯಾವಾಗ ಮುಕ್ತಿ ಹೌದು ಬೆಂಗಳೂರು ಸಬರ್ಬನ್ ರೈಲು ಯೋಜನೆಯ ಡೆಡ್ಲೈನ್ ಬರೋಬ್ಬರಿ ನಾಲ್ಕು ವರ್ಷ ಮುಂದಕ್ಕೆ ಹೋಗಿದೆ ಈ ಬಗ್ಗೆ ಮನಿ ಕಂಟ್ರೋಲ್ ವರದಿ ಮಾಡಿದ್ದು ಯೋಜನೆಯ ವಿಳಂಬಕ್ಕೆ ಮೋದಿ ಗರಂ ಆಗಿದ್ದಾರೆ ಎನ್ನಲಾಗಿದೆ ಬೆಂಗಳೂರು ಸಬರ್ಬನ್ ರೈಲು ಯೋಜನೆ ಒಟ್ಟು ನಾಲ್ಕು ಪ್ರಮುಖ ಕಾರಿಡಾರ್ಗಳನ್ನ ಹೊಂದಿದೆ ಮೂಲ ಯೋಜನೆಯ ಪ್ರಕಾರ ಇವೆಲ್ಲವೂ 2026 ಅಕ್ಟೋಬರ್ ಹೊತ್ತಿಗೆ ಪೂರ್ಣಗೊಳ್ಳಬೇಕಿತ್ತು ಆದರೆ ಇತ್ತೀಚಿಗೆ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಕೆ ರೈಟ್ ಸಂಸ್ಥೆಯು ಪರೀಕ್ಷಿತ ವೇಳಪಟ್ಟಿಯನ್ನ ಪ್ರಧಾನಿಗಳ ಮುಂದೆ ಇಟ್ಟಿದೆ. ಆ ರಿವೈಸ್ಡ್ ಡೆಡ್ಲೈನ್ ನೋಡಿದರೆ ಎಂಥವರಿಗಾದರೂ ಶಾಕ್ ಆಗುತ್ತೆ.
ಅಷ್ಟರ ಮಟ್ಟಿಗೆ ವಿಳಂಬವಾಗಿದೆ ಇದನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳ ಮೇಲೆ ಗರಮಾಗಿದ್ದಾರೆ ಅದಲ್ಲದೆ ಇದು ಕೂಡ ನ್ಯಾಷನಲ್ ಇಂಪಾರ್ಟೆನ್ಸ್ ಇರೋ ಪ್ರಾಜೆಕ್ಟ್ ಆಗಿದ್ದು ಬೇಗ ಮುಗಿಸಿ ಎಂದು ಹೇಳಿದ್ದಾರೆ. ಯಾವ ಲೈನ್ ಡೆಡ್ ಲೈನ್ ಹೇಗಿದೆ ಎಂಬುದನ್ನ ಗಮನಿಸಿದರೆ ಮೊದಲನೆದಾಗಿ ಮಲ್ಲಿಗೆ ಲೈನ್ ಬೆನ್ನಿಗನ ಹಳ್ಳಿಯಿಂದ ಚಿಕ್ಕ ಬಾಣವರದವರೆಗೆ ಸಾಗುವ 25 ಕಿಲೋಮೀಟ ಉದ್ದದ ಈ ಮಾರ್ಗವು ಡಿಸೆಂಬರ್ 2028ಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ ಈ ಮೊದಲು ಇದನ್ನ ಡಿಸೆಂಬರ್ 2025ರಲ್ಲಿ ಮುಗಿಸುತ್ತೇವೆ ಎಂದು ಹೇಳಲಾಗಿತ್ತು ಆದರೆ ಆ ಗಡುವು ಈಗಲೇ ಮಿಸ್ ಆಗಿದೆ ಎರಡನೆದಾಗಿ ಕನಕಲೈನ್ ಹೀಲಲಿಗೆಯಿಂದ ರಾಜನಕುಂಟೆವರೆಗೆ ಇರುವ 42.2 ಕಿಲೋಮೀಟ ಉದ್ದದ ಈ ಮಾರ್ಗಕ್ಕೆ ಹೊಸ ಡೆಡ್ಲೈನ್ ಜೂನ್ 2029 ಇನ್ನು ಅತ್ಯಂತ ಪ್ರಮುಖವಾದ ಅತಿ ಹೆಚ್ಚು ಬೇಡಿಕೆ ಇರುವ ಎರಡು ಲೈನ್ಗಳು ಅಂದರೆ ಏರ್ಪೋರ್ಟ್ ಲೈನ್ ಮತ್ತು ವೈಟ್ ಫೀಲ್ಡ್ ಲೈನ್ಗಳು 2030ರವರೆಗೆ ಸಿಗುವುದಿಲ್ಲ.
ಹೌದು ಕೆಎಸ್ಆರ್ ಬೆಂಗಳೂರು ಸಿಟಿಯಿಂದ ದೇವನಳ್ಳಿಗೆ ಸಂಪರ್ಕ ಕಲ್ಪಿಸುವ 41.4 4 ಕಿಲೋಮೀಟ ಉದ್ದದ ಸಂಪಿಗಿಲೈನ್ ಅಥವಾ ಏರ್ಪೋರ್ಟ್ ಲಿಂಕ್ ಮಾರ್ಚ್ 2030ಕ್ಕೆ ಮುಗಿಯಲಿದೆ ಹಾಗೆಯೇ ಕೆಂಗೇರಿಯಿಂದ ವೈಟ್ ಫೀಲ್ಡ್ಗೆ ಸಂಪರ್ಕ ಕಲ್ಪಿಸುವ 35.5 ಕಿಲೋಮೀಟ ಉದ್ದದ ಪಾರಿಜತ ಲೈನ್ ಕೂಡ ಮಾರ್ಚ್ 2030ರಂದು ಪೂರ್ಣಗೊಳ್ಳುವ ಗುರಿ ಹೊಂದಿದೆ ಅಂದರೆ ಇಂದಿನಿಂದ ಲೆಕ್ಕ ಹಾಕಿದರು ಇನ್ನು ಐದು ವರ್ಷ ಬೆಂಗಳೂರಿಗರು ಕಾಯಲೇಬೇಕು ಪ್ರಧಾನಿ ನರೇಂದ್ರ ಮೋದಿ ಕೆಂಡಾಮಂಡಲ 41 ತಿಂಗಳ ವಿಳಂಬಕ್ಕೆ ಕಾರಣ ಕೇಳಿದ ಪಿಎಂ ಡಿಸೆಂಬರ್ 31ರಂದು ನಡೆದ ಪ್ರಗತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿರವರು ಈ ವಿಳಂಬವನ್ನ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ನಾನು ಶಂಕು ಸ್ಥಾಪನೆ ಮಾಡುವಾಗ 40 ತಿಂಗಳುಗಳಲ್ಲಿ ಮುಗಿಸುತ್ತೇನೆ ಎಂದು ಹೇಳಿದ್ದೆ ಆದರೆ ಈಗ ನೋಡಿದರೆ ಯೋಜನೆ ಬರೊಬ್ಬರಿ 41 ತಿಂಗಳು ವಿಳಂಬವಾಗುತ್ತಿದೆ ಇದಕ್ಕೆ ಕಾರಣ ಯಾರು ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಭೆಯಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತು ಕೆ ರೈಟ್ ಎಂಡಿ ಲಕ್ಷ್ಮಣ್ ಸಿಂಗ್ ಇದ್ದರು ಮೂಲಗಳ ಪ್ರಕಾರ ಪ್ರಧಾನಿ ಮೋದಿ ಎಷ್ಟು ಕೋಪಗೊಂಡಿದ್ದರೆಂದರೆ ಈ ವಿಳಂಬದಿಂದ ಉಂಟಾಗಿರುವ ನಷ್ಟವನ್ನ ಲೆಕ್ಕ ಹಾಕಲು ಮತ್ತು ಇದಕ್ಕೆ ಜವಾಬ್ದಾರರು ಯಾರು ಎಂಬುದನ್ನ ಪತ್ತೆ ಹಚ್ಚಲು ಸಿಎಜಿ ಪರಿಶೀಲನೆ ನಡೆಸುವಂತೆ ಕ್ಯಾಬಿನೆಟ್ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಸಬರ್ಬನ್ ರೈಲು ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ ಟೆಕ್ ಸಿಟಿ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಇದು ಅತ್ಯಗತ್ಯ ಇದನ್ನ ಸ್ಪೀಡ್ ಮಾಡಬೇಕು ಎಂದು ಪ್ರಧಾನಿ ಕಡಕ್ಕಾಗಿ ಸೂಚಿಸಿದ್ದಾರೆ. ಕೆರೆ ಟೆಂಡರ್ ರದ್ದು ಎಲ್ ಎಂಟಿ ಎಕ್ಸಿಟ್ ಸಿವಿಲ್ ಕಾಮಗಾರಿಗೆ ಸಂಚಕಾರ ಭೂಸ್ವಾಧೀನ ಬಾಕಿ ಅಷ್ಟಕ್ಕೂ ಇಷ್ಟು ದೊಡ್ಡ ಮಟ್ಟದ ವಿಳಂಬ ಆಗಿದ್ದು ಯಾಕೆ ಎಂಬುದನ್ನ ನೋಡಿದರೆ ಇದಕ್ಕೆ ಪ್ರಮುಖ ಕಾರಣ ಎಲ್ಎಂಟಿ ಸಂಸ್ಥೆಯ ನಿರ್ಗಮನ ಹೌದು ಮಲ್ಲಿಗೆ ಮತ್ತು ಕನಕ ಲೈನ್ಗಳ ಸಿವಿಲ್ ಕಾಮಗಾರಿ ಗುತ್ತಿಗೆಯನ್ನ ಎಲ್ಎಂಟಿ ಪಡೆದಿತ್ತು ಆದರೆ ಮಾರ್ಚ್ 2025ರಲ್ಲಿ ಈ ಒಪ್ಪಂದದಿಂದ ಎಲ್ಎಂಟಿ ಹಿಂದೆ ಸರೆದಿತ್ತು ಹೀಗಾಗಿ ಕಾಮಗರಿ ಅರ್ಧಕ್ಕೆ ನಿಂತಿತ್ತು ಈಗ ಕೆರೆಡ್ ಸಂಸ್ಥೆಯು ನವೆಂಬರ್ ನಾಲ್ರಂದು ಮಲ್ಲಿಗೆ ಲೈನ್ಗೆ ಮಾತ್ರ ಹೊಸ ಟೆಂಡರ್ ಕರೆದಿದೆ ಜನವರಿ 22ರಂದು ಈ ಟೆಂಡರ್ ಓಪನ್ ಆಗಲಿದ್ದು ನಂತರವಷ್ಟೇ ಕೆಲಸ ಮತ್ತೆ ಶುರುವಾಗಬೇಕಾಗಿದೆ.
ಜನವರಿ 22ರಂದು ಈ ಟೆಂಡರ್ ಓಪನ್ ಆಗಲಿದ್ದು ನಂತರವಷ್ಟೇ ಕೆಲಸ ಮತ್ತೆ ಶುರುವಾಗಬೇಕಾಗಿದೆ. ಕನಕ ಲೈನ್ಗೆ ಇನ್ನು ಟೆಂಡರ್ ಪ್ರಕ್ರಿಯೆ ಬಾಕಿ ಇದೆ ಇನ್ನೊಂದು ದೊಡ್ಡ ಸಮಸ್ಯೆ ಏನಪ್ಪಾ ಅಂದ್ರೆ ಭೂಸ್ವಾಧೀನ ಸಮಸ್ಯೆ ಮಲ್ಲಿಗೆ ಲೈನ್ಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಮುಗಿದಿದೆ ಎಂದು ಕೆಐಎಡಿಬಿ ಹೇಳಿದೆ. ಕನಕ ಲೈನ್ಗೂ ಜಮೀನು ಸಿಕ್ಕಿದೆ ಆದರೆ ಬಾಕಿ ಉಳಿದಿರುವ ಸಂಪಿಗೆ ಅಥವಾ ಏರ್ಪೋರ್ಟ್ ಲೈನ್ ಮತ್ತು ಪಾರಿಜಾತ ಲೈನ್ಗಳಿಗೆ ಇನ್ನು ರೈಲ್ವೆ ಇಲಾಖೆಯಿಂದ ಮತ್ತು ಇತರ ಮೂಲಗಳಿಂದ ಭೂಮಿ ಹಸ್ತಾಂತರ ಆಗಬೇಕಾಗಿದೆ. ಭೂಸ್ವಾಧೀನವೇ ಮುಗಿಯದೆ ಕಾಮಗಾರಿ ಶುರು ಮಾಡುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಏರ್ಪೋರ್ಟ್ ಲೈನ್ಗೆ ಗುಡ್ ನ್ಯೂಸ್. ಅಲೈನ್ಮೆಂಟ್ ಗೆ ಸಿಕ್ತು ಗ್ರೀನ್ ಸಿಗ್ನಲ್. ಇಷ್ಟೆಲ್ಲ ಬ್ಯಾಡ್ ನ್ಯೂಸ್ಗಳ ನಡುವೆ ಒಂದು ಸಣ್ಣ ರಿಲೀಫ್ ಸುದ್ದಿ ಕೂಡ ಇದೆ ಅದೇನಂದ್ರೆ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಸಂಪಿಗೆ ಲೈನ್ನ ಅಲೈನ್ಮೆಂಟ್ ಅಥವಾ ಮಾರ್ಗ ನಕ್ಷೆಗೆ ನೈರುತ್ಯ ರೈಲ್ವೆ ಕೊನೆಗೂ ಅನುಮೋದನೆ ನೀಡಿದೆ.
ಈ ಅನುಮೋದನೆಗಾಗಿ ಎರಡು ವರ್ಷಗಳಿಂದ ಕಾಯಲಾಗುತ್ತಿತ್ತು ಪ್ರಧಾನಿಗಳ ಸಭೆಗೆ ಕೇವಲ ಕೆಲವೇ ಗಂಟೆಗಳ ಮೊದಲು ಈ ಅನುಮೋದನೆ ಸಿಕ್ಕಿದೆ. ಹೊಸ ಅಲೈನ್ಮೆಂಟ್ ಪ್ರಕಾರ ಈ ಲೈನ್ ಕೆಎಸ್ಆರ್ ಬೆಂಗಳೂರು ಸಿಟಿಯಿಂದ ಹೊರಟು. ಯಶವಂತಪುರ ಯಲಹಂಕ ಮೂಲಕ ಸಾಗಿ ಟ್ರಂಪೆಟ್ ಇಂಟರ್ಚೇಂಜ್ ಬಳಿ ತಿರುವು ಪಡೆದು ಬಿಕೆ ಹಳ್ಳಿ ಮತ್ತು ಏರೋಸ್ಪೇಸ್ ಪಾರ್ಕ್ ಮೂಲಕ ದೇವನಹಳ್ಳಿ ಏರ್ಪೋರ್ಟ್ ಟರ್ಮಿನಲ್ ತಲುಪಲಿದೆ. ಆರಂಭದಲ್ಲಿ ಈ ಲೈನ್ ಮತ್ತು ನಮ್ಮ ಮೆಟ್ರೋದ ಏರ್ಪೋರ್ಟ್ ಲೈನ್ ಒಂದಕ್ಕೊಂದು ಪ್ಯಾರಲಲ್ ಆಗಿ ಹೋಗುತ್ತಿರುವುದರಿಂದ ವಿದೇಶಿ ಸಾಲ ಪಡೆಯಲು ತೊಂದರೆಯಾಗಬಹುದು ಎಂದು ರಾಜ್ಯ ಸರ್ಕಾರ ತಕರಾರು ತೆಗೆದಿತ್ತು. ಈ ಗೊಂದಲಗಳಿಂದಲೇ ಏರ್ಪೋರ್ಟ್ ಲೈನ್ ಇಷ್ಟು ತಡವಾಯಿತು ಈಗ ಅಲೈನ್ಮೆಂಟ್ ಕ್ಲಿಯರ್ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಭೂಸ್ವಾಧೀನಕ್ಕೆ ಚಾಲನೆ ಸಿಗಲಿದೆ ರೈಲು ಭೋಗಿಗಳೇ ಸಿಕ್ಕಿಲ್ಲ ಮುಂದೇನು ಕೋಚ್ಗಳಿಗೆ ಎರಡು ವರ್ಷ ಕಾಯಲೇಬೇಕು ಇನ್ನು ಹಳಿ ಹಾಕಿದರೆ.
ಸಾಲದು ಅದರ ಮೇಲೆ ಓಡಲು ರೈಲ್ ಬೇಕಲ್ಲವೇ ಇಲ್ಲೂ ಕೂಡ ದೊಡ್ಡ ಎಡವಟ್ಟಾಗಿದೆ ಆರಂಭದಲ್ಲಿ ಖಾಸಗಿ ಕಂಪನಿಗಳಿಂದ ರೈಲುಗಳನ್ನ ಲೀಸ್ಗೆ ಅಥವಾ ಬಾಡಿಗೆಗೆ ಪಡೆಯಲು ಕೆರೆಟ್ ಪ್ಲಾನ್ ಮಾಡಿತ್ತು ಆದರೆ ಯಾವ ಖಾಸಗಿ ಕಂಪನಿಯು ಮುಂದೆ ಬರಲಿಲ್ಲ ಹೀಗಾಗಿ ಸಮಯ ವ್ಯರ್ಥವಾಯಿತು ಈಗ ಅನಿವಾರ್ಯವಾಗಿ ಚೆನ್ನೈನಲ್ಲಿರುವ ಐಸಿಎಫ್ ಅಂದರೆ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಇಂದಲೇ ನೇರವಾಗಿ ಮೆಟ್ರೋ ಮಾದರಿಯ ಎಸಿ ಕೋಚ್ಗಳನ್ನ ಖರೀದಿಸಲು ನಿರ್ಧರಿಸಲಾಗಿದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವರವರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಆದರೆ ಇಲ್ಲೊಂದು ಸಮಸ್ಯೆ ಇದೆ ಐಸಿಎಫ್ ಗೆ ಆರ್ಡರ್ ಕೊಟ್ಟ ತಕ್ಷಣ ರೈಲು ಸಿಗಲ್ಲ ಕೋಚ್ಗಳ ತಯಾರಿಕೆ ಮತ್ತು ಡೆಲಿವರಿಗೆ ಕನಿಷ್ಠ ಎರಡು ವರ್ಷ ಬೇಕು. ಅಂದರೆ ಇವತ್ತು ಆರ್ಡರ್ ಕೊಟ್ಟರು ರೈಲು ಬರಲು 2027 ಆಗುತ್ತೆ. ಜೊತೆಗೆ ಟೆಂಡರ್ ಇಲ್ಲದೆ ನೇರವಾಗಿ ಖರೀದಿ ಮಾಡುತ್ತಿರುವುದರಿಂದ ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯಿಂದ ಸೆಕ್ಷನ್ 4ಜಿ ಅಡಿಯಲ್ಲಿ ವಿನಾಯತಿ ಪಡೆಯಬೇಕಿದೆ. ಈ ಪ್ರಸ್ತಾವನೆ ಇನ್ನು ಸರ್ಕಾರದ ಮುಂದೆ ಇದೆ.
ಒಟ್ಟು 306 ಕೋಚ್ಗಳನ್ನ ಖರೀದಿಸಲು 4300 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಇದರಲ್ಲಿ ಅರ್ಧದಷ್ಟು ಹಣವನ್ನ ರಾಜ್ಯ ಸರ್ಕಾರ ಈಗಾಗಲೇ ಅನುಮೋದಿಸಿದೆ. ಟನಲ್ ರೋಡ್ಗಿರುವ ಉತ್ಸಾಹ ಸಬ್ಬರ್ಬನ್ ಗೆ ಇಲ್ಲ ಕೆರೆಡ್ ಎಂಡಿ ಯಇಂದ ಹೊಸ ವರ್ಷದ ಆಶಾಭಾವ ಯೋಜನೆಯ ವಿಳಂಬದ ಬಗ್ಗೆ ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನವಿದೆ ರಾಜ್ಯ ಸರ್ಕಾರವು ಟನ್ನಲ್ ರೋಡ್ ಯೋಜನೆಯ ಬಗ್ಗೆ ತೋರಿಸುತ್ತಿರುವ ಉತ್ಸಾಹದಲ್ಲಿ ಶೇಕಡ 20ರಷ್ಟು ಆಸಕ್ತಿಯನ್ನ ಸಬ್ ಅರ್ಬನ್ ರೈಲ್ ಯೋಜನೆ ಮೇಲೆ ತೋರಿಸಿದರೆ ಈ ಪಾಟಿಗೆ ಈ ಯೋಜನೆ ಎಂದೋ ಹಳಿಯ ಮೇಲೆ ಇರುತ್ತಿತ್ತು ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ ಟನಲ್ ರೋಡ್ ಇನ್ನು ಕಾಗದದ ಮೇಲಿದ್ದರೆ ಸಬ್ ಅರ್ಬನ್ ರೈಲು ಈಗಾಗಲೇ ಗ್ರೌಂಡ್ ಮೇಲೆ ನಡೆತಿರುವ ಕೆಲಸ ಆದರೂ ಸರ್ಕಾರ ಇದಕ್ಕೆ ನೀಡಬೇಕಾದ ಆಧ್ಯತೆಯನ್ನ ನೀಡುತ್ತಿಲ್ಲವೇ ಎಂಬ ಪ್ರಶ್ನೆ ಈಗ ಈ ಹೇಳಿಕೆಯಿಂದ ಹುಟ್ಟಿಕೊಂಡಿದೆ ಆದರೆ ಕೆರೆಡ್ ಎಂಡಿ ಲಕ್ಷ್ಮಣ್ ಸಿಂಗ್ರವರು ಮಾತ್ರ ಹೊಸ ವರ್ಷದ ಸಂದೇಶದಲ್ಲಿ ಆಶವಾದ ವ್ಯಕ್ತಪಡಿಸಿದ್ದಾರೆ ನಾವು ವಿಳಂಬವನ್ನ ಮೆಟ್ಟು ನಿಲ್ಲುತ್ತೇವೆ.
ಬೆಂಗಳೂರಿನ ನಾಗರಿಕರ ಜೀವನ ಮಟ್ಟವನ್ನ ಸುಧಾರಿಸಲು ನಾವು ಬದ್ದರಾಗಿದ್ದೇವೆ ಸಬರ್ಬನ್ ರೈಲು ಕೇವಲ ಪ್ರಯಾಣವಲ್ಲ ಇದು ಆರ್ಥಿಕ ಅಭಿವೃದ್ಧಿಯ ಸಂಕೇತ ಎಂದು ಅವರು ಹೇಳಿದ್ದಾರೆ ಒಟ್ಟಿನಲ್ಲಿ 1983 ರಲ್ಲಿ ಕಂಡ ಕನಸು 2022 ರಲ್ಲಿ ಪಡೆದ ಜೀವ ಈಗ 2030ರತ್ತ ದೃಷ್ಟಿ ನೆಟ್ಟಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ರಾಮಬಾಣವಾಗಬೇಕಿದ್ದ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ ಗುತ್ತಿಗೆದಾರರ ಸಮಸ್ಯೆ ಮತ್ತು ಭೂಸ್ವಾಧೀನದ ತೊಡಕುಗಳಲ್ಲಿ ಸಿಲುಕಿ ನಲುಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಡಕ್ ವಾರ್ನಿಂಗ್ ನಂತರವಾದರೂ ಕಾಮಗಾರಿ ವೇಗ ಪಡೆಯುತ್ತಾ ಎಂಬುದನ್ನ ಕಾದು ನೋಡಬೇಕಿದೆ. ಅಲ್ಲಿಯವರೆಗೂ ಬೆಂಗಳೂರಿಗರು 2030ರವರೆಗೂ ಟ್ರಾಫಿಕ್ ಜಾಮ್ನಲ್ಲೇ ನರಳಬೇಕು. ಅಲ್ಲಿಯವರೆಗೂ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.


